ಅಸ್ವಸ್ಥರು

ಜನ ಜನ ನಮ್ಮ ಜನ
ಕಾಳು ಕಡ್ಡಿ ತಿನ್ನುವ ಜನ
ಹುಲ್ಲು ಮೇದು ಬರುವ ಜನ
ಯಾವ ಕಸಾಯಿಖಾನೆಗೆ ಈ ಜನ ?

ನಶ್ಶವ ತಿಣಿಕಿ ಎಡೆ ಎಡೆ ಹಣಿಕಿ
ಏಕ್ಸಿ ಏಕ್ಸಿ ಎನ್ನುವರು
ಎಡಬಲವೆನ್ನದೆ ಗಾಳಿಗೆ ಉಗಿದು
ಬಯ್ಯುವರು ಬಯ್ಯಿಸಿಕೊಳ್ಳುವರು

ಸಿಹಿ ಸಿಹಿ ಗುಲಾಬುಜಾಮೂನು ನುಂಗಿ ಖಾರಾ ಹಾಕಿ
ಹುರಿದ ಚಮ್ಮೀನು ಕಡಿಮೆ ಕೈ ಬಾಯಿ ಒರೆಸಿ
ಸಿಗರೇಟು ಕಚ್ಚಿ ತೊದಲಬಹುದು ಆಸ್ತಿತ್ವವಾದ
ಚಪ್ಪರಿಸಬಹುದು ಬಾಯಿ ಏನರೀ ರಾಜೀವಿ ಬಾಯಿ
ನವಂಬರದ ಸಂಜೆ ಬೀಚಿನಲ್ಲೋ ಪಾರ್ಕಿನಲ್ಲೋ
ತಾತ್ವಿಕ ಚರ್ಚೆಯಲ್ಲಿ ಮನಸ್ಸು ಮರೆತು
ಟೀಬಲಿನ ಕೆಳಗೆ ಕಾಲಿಗೆ ಕಾಲು ಬೆರೆತು
ಎಕ್ಕಾ ಜಾಕಿ ರಾಜಾ ರಾಣಿ-ಹೀಗೆ ಕಿಂಚಿತ್ತು ಮಜಾ
ಸ್ವಯಂ ಪ್ರೇರಿತ ಅಬ್ಬರ ಕ್ಷಣದಲ್ಲಿ ಸುಟ್ಟು ಕರಗಿ
ನೀರು ಬತ್ತಿದ ನಲ್ಲಿ ಹಾಳು ಬಿದ್ದ ಗಲ್ಲಿ
ತಾರಸಿ ನೋಡುವ ಜನ
ಹೊಟ್ಟು ತುಂಬಿ ಮಾಡಿಟ್ಟ ಸಂತೆಯಲ್ಲಿ ತಂದಿಟ್ಟ
ಟೊಳ್ಳು ಜನಾ ಜನಾ

ಬೆಳಕಿಗೆ ಕಾಯುವ ಖಾಲಿ ಜನ
ಜಾರಿ-ಬೇಕಾಗಿಯೋ ಬೇಡಾಗಿಯೋ
ಈ ಇಳಿಜಾರಿನಲ್ಲಿ ತೆವಳಲೆ ಬೇಕು
ಒಳಗಿನ ಶೂನ್ಯದಲ್ಲಿ ಸುಳಿಯಲೆ ಬೇಕು
ತೂಕಡಿಸುವವರು ಗಾಂಜಾ ಮುಖದವರು
ಅಸ್ವಸ್ಥರು ಈ
ಸಂಜೆಯ ಜನರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ
Next post ಹಾಸಿಗೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys